Saturday 5 July 2014

ಕ್ರ.ಸಂ.ಪ್ರಶಸ್ತಿವಿವರಣೆ
1ಪರಮ ವೀರ ಚಕ್ರಭಾರತ ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದು. ಇದು ಭಾರತ ಸರಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಸದರಿ ಧ್ಯೇಯದೊಂದಿಗೆ ನೀಡಲಾಗುತ್ತದೆ - "... most conspicuous bravery or some daring or pre-eminent act of valour or self sacrifice, in the presence of the enemy, whether on land, at sea, or in the air." ಬ್ರಿಟಿಷ್ ಸೈನ್ಯದಲ್ಲಿ ನೀಡುವ Victoria Cross, ಅಮೆರಿಕಾ ಸೈನ್ಯದಲ್ಲಿ ನೀಡುವ Medal of Honor, ಫ್ರಾನ್ಸ್ ದೇಶದಲ್ಲಿ ನೀಡುವ Legion of Honor, ರಷಿಯಾದಲ್ಲಿ ನೀಡುವ Cross of St.George ಥರ ಭಾರತ ಸೇನೆಯಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಆಗಸ್ಟ್ 15 1947 ರಿಂದ ಜಾರಿಗೆ ಬರುವಂತೆ 26 ಜನವರಿ 1950ರಂದು ಸೃಜಿಸಲಾಯಿತು. ಸಾವಿತ್ರಿ ಖಾನೋಲ್ಕರ್( ಮೂಲ ಹೆಸರು - Eva Yuonne Linda Maday-de-Maros {Hungarian ತಂದೆ ಮತ್ತು Russian ತಾಯಿ} ) ಎಂಬ ಭಾರತೀಯ ಸೇನಾಧಿಕಾರಿಯೊಬ್ಬರ ಪತ್ನಿ, ಈ ಪ್ರಶಸ್ತಿಯ ರೂಪುರೇಶೆ ತಯಾರಿಸಿದರು. ಆಕಸ್ಮಿಕವೆಂಬಂತೆ ಅವರ ಅಳಿಯ ಮೇಜರ್ ಸೋಮನಾಥ ಶರ್ಮಾ, ಈ ಪ್ರಶಸ್ತಿಯನ್ನ ಪಡೆದ ಮೊದಲಿಗರಾದರು. ಕಂಚಿನಿಂದ ತಯಾರಿಸಲಾಗುವ ಈ ಪದಕದ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವನ್ನ ಉಬ್ಬಾದ ವೃತ್ತದ ಮೇಲೆ ಮೂಡಿಸಲಾಗಿದೆ. ಇದನ್ನ ಸುತ್ತುವರೆದಂತೆ ಇಂದ್ರ ವಜ್ರಾಯುಧದ ನಾಲ್ಕು Replica ಗಳಿವೆ. ಪದಕದ ಇನ್ನೊಂದು ಬದಿಯಲ್ಲಿ ಕಮಲ ಪುಷ್ಪದಿಂದ ಪ್ರತ್ಯೇಕಗೊಂಡಂತೆ ' ಪರಮವೀರ ಚಕ್ರ ' ಎಂಬುದನ್ನ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕೆತ್ತಲಾಗಿದೆ. ಋಷಿ ದಧೀಚಿ ದೇವತೆಗಳಿಗೆ ತನ್ನ ದೇಹದ ಮೂಳೆಯನ್ನು ವಜ್ರಾಯುಧ ಸೃಷ್ಟಿಗೆ ನೀಡಿದ ಐತಿಹ್ಯವೇ ಈ ಪದಕ ಪ್ರದಾನದ ಹಿಂದಿರುವ ತತ್ವ.
2ಇತರೆ ಸೇನಾ ಪದಕಗಳುii. ಮಹಾವೀರ ಚಕ್ರ - ಇದು ಎರಡನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ. iii. ವೀರ ಚಕ್ರ - ಇದು ಮೂರನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ಕೊರೆಯಲಾದ ಚಕ್ರದ ಮೇಲೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಕಡು ನೀಲಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ.
3ಭಾರತ ರತ್ನಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಕಲೆ, ಸಾಹಿತ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳ ಜೊತೆಗೆ ಸಾರ್ವಜನಿಕ ರಂಗದಲ್ಲಿ ಗುರುತಿಸಬಹುದಾದ ಸಾಧನೆಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. 2ನೇ ಜನವರಿ 1954 ರಂದು ಸ್ಥಾಪಿತವಾದ ಈ ಪ್ರಶಸ್ತಿ 13ನೇ ಜುಲೈ 1977 ರಿಂದ 26ನೇ ಜನವರಿ 1980 ರವರೆಗೆ ಯಾರನ್ನೂ ಅಲಂಕರಿಸಲಿಲ್ಲ. ಅರಳಿ ಮರದ ಎಲೆಯಾಕರದ ಈ ಪದಕದ ಒಂದು ಬದಿ ಸೂರ್ಯನ ಚಿತ್ರದ ಕೆಳಗೆ ಭಾರತ ರತ್ನ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇನ್ನೊಂದು ಬದಿಯಲ್ಲಿ ರಾಷ್ಟ್ರ ಲಾಂಛನ ಮತ್ತು ಧ್ಯೇಯ ವಾಕ್ಯ ಕೆತ್ತಲಾಗಿದೆ. ಬಿಳಿ ಬಣ್ಣದ Ribbon ಈ ಪದಕವನ್ನ ಹಿಡಿದಿಡುತ್ತದೆ. ಪ್ರಶಸ್ತಿ ಆರಂಭಿಸುವಾಗ ನಿಯಮಗಳಲ್ಲಿ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಈ ಪ್ರಶಸ್ತಿಗೆ ಭಾಜನರಾಗಲಿಲ್ಲ. 1992 ರಲ್ಲಿ ನೇತಾಜಿ ಸುಭಾಷ ಚಂದ್ರರಿಗೆ ನೀಡಿದ ಈ ಪ್ರಶಸ್ತಿಯನ್ನ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಕಾನೂನಿನ ತೊಡಕುಗಳ ಕಾರಣ ಹಿಂಪಡೆಯಲಾಯಿತು. ಸುಭಾಷ ಚಂದ್ರರು ನಿಧನರಾಗಿರುವ ಖಚಿತ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲದಿರುವುದು ಪ್ರಶಸ್ತಿ ಹಿಂಪಡೆಯಲು ಕಾರಣವಾಯಿತು.
4ಪದ್ಮ ವಿಭೂಷಣಭಾರತ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
5ಪದ್ಮಭೂಷಣಭಾರತ ಸರ್ಕಾರ ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
6ಪದ್ಮಶ್ರೀಭಾರತ ಸರ್ಕಾರ ನೀಡುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
7ದಾದಾ ಸಾಹೇಬ ಫಾಲ್ಕೆ1969 ರಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನ ಸ್ಥಾಪಿಸಿ ಸಿನೆಮಾ ಜಗತ್ತಿನಲ್ಲಿ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿಯನ್ನ ನೀಡುತ್ತ ಬಂದಿದೆ. ಆ ವರ್ಷ ದಾದಾ ಸಾಹೇಬ್ ಫಾಲ್ಕೆ ಯವರ ಜನ್ಮ ಶತಮಾನೋತ್ಸವ.
8ರಾಜೀವ್ ಗಾಂಧಿ ಖೇಲ್ ರತ್ನಕ್ರೀಡಾ ಕ್ಷೇತ್ರದಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ. 1991-92 ರಲ್ಲಿ ಈ ಪ್ರಶಸ್ತಿಯನ್ನ ಆರಂಭಿಸಲಾಯಿತು. ತಂಡ ಅಥವಾ ವ್ಯಕ್ತಿ ಇಬ್ಬರಿಗೂ ನೀಡಬಹುದಾದ ಪ್ರಶಸ್ತಿ ಇದು. ಪ್ರತಿ ವರ್ಷ 1ನೇ ಏಪ್ರಿಲ್ ನಿಂದ ಮುಂದಿನ ವರ್ಷದ 31 ಮಾರ್ಚ್ ವರೆಗಿನ ಸಾಧನೆಯನ್ನ ಪರಿಗಣಿಸಲಾಗುತ್ತದೆ. ಯಾವುದೇ ರಾಜ್ಯ ಸರ್ಕಾರ, ಲೋಕಸಭಾ ಸದಸ್ಯ, SAI ಅಥವಾ ಆಯಾ ಕ್ರೀಡೆಯ ರಾಷ್ಟ್ರೀಯ ಪ್ರಾಧಿಕಾರಗಳು ನಾಮನಿರ್ದೇಶವನ್ನ ಕೇಂದ್ರ ಸರ್ಕಾರದ ಯುವಜನಸೇವಾ ಇಲಾಖೆಗೆ ಸಲ್ಲಿಸಬೇಕು. ಈ ಪ್ರಶಸ್ತಿಯು ಪದಕ, ರೂ. 7,50,000/- ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
9ಅರ್ಜುನ ಪ್ರಶಸ್ತಿ1961 ರಲ್ಲಿ ಕೇಂದ್ರ ಸರ್ಕಾರ ಇದನ್ನ ಸ್ಥಾಪಿಸಿತು. ಕಳೆದ ಮೂರು ವರ್ಷಗಳಲ್ಲಿ ಗಣನೀಯ ಹಾಗೂ ನಿಯಮಿತ ಸಾಧನೆ ಮಾಡಿ, ಪ್ರಶಸ್ತಿಗೆ ಭಾಜನರಾದ ವರ್ಷಕ್ಕೆ ಅತ್ಯುತ್ತಮ ಅನ್ನಬಹುದಾದ ಸಾಧನೆ ಮಾಡಿದ್ದಲ್ಲಿ ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ರೂ.5,00,000/- ನಗದು , ಅರ್ಜುನನ ಕಂಚಿನ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನ ಇದು ಒಳಗೊಂಡಿದೆ.
10ದ್ರೋಣಾಚಾರ್ಯ ಪ್ರಶಸ್ತಿ1985 ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿಯನ್ನ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ. ದ್ರೋಣಾಚಾರ್ಯರ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ರೂ.3,00,000/- ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ.
11ಧ್ಯಾನಚಂದ್ ಪ್ರಶಸ್ತಿಕ್ರೀಡಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿ ಇದು. 2002ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿ ಒಂದು ಪ್ರಶಸ್ತಿ ಫಲಕ , ರೂ.1,50,000/- ನಗದು ಮತ್ತು ಪ್ರಶಸ್ತಿ ಪತ್ರವನ್ನ ಒಳಗೊಂಡಿದೆ.
ಕ್ರ.ಸಂ.ಪ್ರಶಸ್ತಿವಿವರಣೆ
1ಪರಮ ವೀರ ಚಕ್ರಭಾರತ ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದು. ಇದು ಭಾರತ ಸರಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಸದರಿ ಧ್ಯೇಯದೊಂದಿಗೆ ನೀಡಲಾಗುತ್ತದೆ - "... most conspicuous bravery or some daring or pre-eminent act of valour or self sacrifice, in the presence of the enemy, whether on land, at sea, or in the air." ಬ್ರಿಟಿಷ್ ಸೈನ್ಯದಲ್ಲಿ ನೀಡುವ Victoria Cross, ಅಮೆರಿಕಾ ಸೈನ್ಯದಲ್ಲಿ ನೀಡುವ Medal of Honor, ಫ್ರಾನ್ಸ್ ದೇಶದಲ್ಲಿ ನೀಡುವ Legion of Honor, ರಷಿಯಾದಲ್ಲಿ ನೀಡುವ Cross of St.George ಥರ ಭಾರತ ಸೇನೆಯಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಆಗಸ್ಟ್ 15 1947 ರಿಂದ ಜಾರಿಗೆ ಬರುವಂತೆ 26 ಜನವರಿ 1950ರಂದು ಸೃಜಿಸಲಾಯಿತು. ಸಾವಿತ್ರಿ ಖಾನೋಲ್ಕರ್( ಮೂಲ ಹೆಸರು - Eva Yuonne Linda Maday-de-Maros {Hungarian ತಂದೆ ಮತ್ತು Russian ತಾಯಿ} ) ಎಂಬ ಭಾರತೀಯ ಸೇನಾಧಿಕಾರಿಯೊಬ್ಬರ ಪತ್ನಿ, ಈ ಪ್ರಶಸ್ತಿಯ ರೂಪುರೇಶೆ ತಯಾರಿಸಿದರು. ಆಕಸ್ಮಿಕವೆಂಬಂತೆ ಅವರ ಅಳಿಯ ಮೇಜರ್ ಸೋಮನಾಥ ಶರ್ಮಾ, ಈ ಪ್ರಶಸ್ತಿಯನ್ನ ಪಡೆದ ಮೊದಲಿಗರಾದರು. ಕಂಚಿನಿಂದ ತಯಾರಿಸಲಾಗುವ ಈ ಪದಕದ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವನ್ನ ಉಬ್ಬಾದ ವೃತ್ತದ ಮೇಲೆ ಮೂಡಿಸಲಾಗಿದೆ. ಇದನ್ನ ಸುತ್ತುವರೆದಂತೆ ಇಂದ್ರ ವಜ್ರಾಯುಧದ ನಾಲ್ಕು Replica ಗಳಿವೆ. ಪದಕದ ಇನ್ನೊಂದು ಬದಿಯಲ್ಲಿ ಕಮಲ ಪುಷ್ಪದಿಂದ ಪ್ರತ್ಯೇಕಗೊಂಡಂತೆ ' ಪರಮವೀರ ಚಕ್ರ ' ಎಂಬುದನ್ನ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕೆತ್ತಲಾಗಿದೆ. ಋಷಿ ದಧೀಚಿ ದೇವತೆಗಳಿಗೆ ತನ್ನ ದೇಹದ ಮೂಳೆಯನ್ನು ವಜ್ರಾಯುಧ ಸೃಷ್ಟಿಗೆ ನೀಡಿದ ಐತಿಹ್ಯವೇ ಈ ಪದಕ ಪ್ರದಾನದ ಹಿಂದಿರುವ ತತ್ವ.
2ಇತರೆ ಸೇನಾ ಪದಕಗಳುii. ಮಹಾವೀರ ಚಕ್ರ - ಇದು ಎರಡನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ. iii. ವೀರ ಚಕ್ರ - ಇದು ಮೂರನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ಕೊರೆಯಲಾದ ಚಕ್ರದ ಮೇಲೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಕಡು ನೀಲಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ.
3ಭಾರತ ರತ್ನಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಕಲೆ, ಸಾಹಿತ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳ ಜೊತೆಗೆ ಸಾರ್ವಜನಿಕ ರಂಗದಲ್ಲಿ ಗುರುತಿಸಬಹುದಾದ ಸಾಧನೆಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. 2ನೇ ಜನವರಿ 1954 ರಂದು ಸ್ಥಾಪಿತವಾದ ಈ ಪ್ರಶಸ್ತಿ 13ನೇ ಜುಲೈ 1977 ರಿಂದ 26ನೇ ಜನವರಿ 1980 ರವರೆಗೆ ಯಾರನ್ನೂ ಅಲಂಕರಿಸಲಿಲ್ಲ. ಅರಳಿ ಮರದ ಎಲೆಯಾಕರದ ಈ ಪದಕದ ಒಂದು ಬದಿ ಸೂರ್ಯನ ಚಿತ್ರದ ಕೆಳಗೆ ಭಾರತ ರತ್ನ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇನ್ನೊಂದು ಬದಿಯಲ್ಲಿ ರಾಷ್ಟ್ರ ಲಾಂಛನ ಮತ್ತು ಧ್ಯೇಯ ವಾಕ್ಯ ಕೆತ್ತಲಾಗಿದೆ. ಬಿಳಿ ಬಣ್ಣದ Ribbon ಈ ಪದಕವನ್ನ ಹಿಡಿದಿಡುತ್ತದೆ. ಪ್ರಶಸ್ತಿ ಆರಂಭಿಸುವಾಗ ನಿಯಮಗಳಲ್ಲಿ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಈ ಪ್ರಶಸ್ತಿಗೆ ಭಾಜನರಾಗಲಿಲ್ಲ. 1992 ರಲ್ಲಿ ನೇತಾಜಿ ಸುಭಾಷ ಚಂದ್ರರಿಗೆ ನೀಡಿದ ಈ ಪ್ರಶಸ್ತಿಯನ್ನ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಕಾನೂನಿನ ತೊಡಕುಗಳ ಕಾರಣ ಹಿಂಪಡೆಯಲಾಯಿತು. ಸುಭಾಷ ಚಂದ್ರರು ನಿಧನರಾಗಿರುವ ಖಚಿತ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲದಿರುವುದು ಪ್ರಶಸ್ತಿ ಹಿಂಪಡೆಯಲು ಕಾರಣವಾಯಿತು.
4ಪದ್ಮ ವಿಭೂಷಣಭಾರತ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
5ಪದ್ಮಭೂಷಣಭಾರತ ಸರ್ಕಾರ ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
6ಪದ್ಮಶ್ರೀಭಾರತ ಸರ್ಕಾರ ನೀಡುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
7ದಾದಾ ಸಾಹೇಬ ಫಾಲ್ಕೆ1969 ರಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನ ಸ್ಥಾಪಿಸಿ ಸಿನೆಮಾ ಜಗತ್ತಿನಲ್ಲಿ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿಯನ್ನ ನೀಡುತ್ತ ಬಂದಿದೆ. ಆ ವರ್ಷ ದಾದಾ ಸಾಹೇಬ್ ಫಾಲ್ಕೆ ಯವರ ಜನ್ಮ ಶತಮಾನೋತ್ಸವ.
8ರಾಜೀವ್ ಗಾಂಧಿ ಖೇಲ್ ರತ್ನಕ್ರೀಡಾ ಕ್ಷೇತ್ರದಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ. 1991-92 ರಲ್ಲಿ ಈ ಪ್ರಶಸ್ತಿಯನ್ನ ಆರಂಭಿಸಲಾಯಿತು. ತಂಡ ಅಥವಾ ವ್ಯಕ್ತಿ ಇಬ್ಬರಿಗೂ ನೀಡಬಹುದಾದ ಪ್ರಶಸ್ತಿ ಇದು. ಪ್ರತಿ ವರ್ಷ 1ನೇ ಏಪ್ರಿಲ್ ನಿಂದ ಮುಂದಿನ ವರ್ಷದ 31 ಮಾರ್ಚ್ ವರೆಗಿನ ಸಾಧನೆಯನ್ನ ಪರಿಗಣಿಸಲಾಗುತ್ತದೆ. ಯಾವುದೇ ರಾಜ್ಯ ಸರ್ಕಾರ, ಲೋಕಸಭಾ ಸದಸ್ಯ, SAI ಅಥವಾ ಆಯಾ ಕ್ರೀಡೆಯ ರಾಷ್ಟ್ರೀಯ ಪ್ರಾಧಿಕಾರಗಳು ನಾಮನಿರ್ದೇಶವನ್ನ ಕೇಂದ್ರ ಸರ್ಕಾರದ ಯುವಜನಸೇವಾ ಇಲಾಖೆಗೆ ಸಲ್ಲಿಸಬೇಕು. ಈ ಪ್ರಶಸ್ತಿಯು ಪದಕ, ರೂ. 7,50,000/- ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
9ಅರ್ಜುನ ಪ್ರಶಸ್ತಿ1961 ರಲ್ಲಿ ಕೇಂದ್ರ ಸರ್ಕಾರ ಇದನ್ನ ಸ್ಥಾಪಿಸಿತು. ಕಳೆದ ಮೂರು ವರ್ಷಗಳಲ್ಲಿ ಗಣನೀಯ ಹಾಗೂ ನಿಯಮಿತ ಸಾಧನೆ ಮಾಡಿ, ಪ್ರಶಸ್ತಿಗೆ ಭಾಜನರಾದ ವರ್ಷಕ್ಕೆ ಅತ್ಯುತ್ತಮ ಅನ್ನಬಹುದಾದ ಸಾಧನೆ ಮಾಡಿದ್ದಲ್ಲಿ ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ರೂ.5,00,000/- ನಗದು , ಅರ್ಜುನನ ಕಂಚಿನ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನ ಇದು ಒಳಗೊಂಡಿದೆ.
10ದ್ರೋಣಾಚಾರ್ಯ ಪ್ರಶಸ್ತಿ1985 ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿಯನ್ನ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ. ದ್ರೋಣಾಚಾರ್ಯರ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ರೂ.3,00,000/- ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ.
11ಧ್ಯಾನಚಂದ್ ಪ್ರಶಸ್ತಿಕ್ರೀಡಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿ ಇದು. 2002ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿ ಒಂದು ಪ್ರಶಸ್ತಿ ಫಲಕ , ರೂ.1,50,000/- ನಗದು ಮತ್ತು ಪ್ರಶಸ್ತಿ ಪತ್ರವನ್ನ ಒಳಗೊಂಡಿದೆ.
ಕ್ರ.ಸಂ. ಪ್ರಶಸ್ತಿ ವಿವರಣೆ

1 ಪರಮ ವೀರ ಚಕ್ರ ಭಾರತ ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದು. ಇದು ಭಾರತ ಸರಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಸದರಿ ಧ್ಯೇಯದೊಂದಿಗೆ ನೀಡಲಾಗುತ್ತದೆ - "... most conspicuous bravery or some daring or pre-eminent act of valour or self sacrifice, in the presence of the enemy, whether on land, at sea, or in the air." ಬ್ರಿಟಿಷ್ ಸೈನ್ಯದಲ್ಲಿ ನೀಡುವ Victoria Cross, ಅಮೆರಿಕಾ ಸೈನ್ಯದಲ್ಲಿ ನೀಡುವ Medal of Honor, ಫ್ರಾನ್ಸ್ ದೇಶದಲ್ಲಿ ನೀಡುವ Legion of Honor, ರಷಿಯಾದಲ್ಲಿ ನೀಡುವ Cross of St.George ಥರ ಭಾರತ ಸೇನೆಯಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಆಗಸ್ಟ್ 15 1947 ರಿಂದ ಜಾರಿಗೆ ಬರುವಂತೆ 26 ಜನವರಿ 1950ರಂದು ಸೃಜಿಸಲಾಯಿತು. ಸಾವಿತ್ರಿ ಖಾನೋಲ್ಕರ್( ಮೂಲ ಹೆಸರು - Eva Yuonne Linda Maday-de-Maros {Hungarian ತಂದೆ ಮತ್ತು Russian ತಾಯಿ} ) ಎಂಬ ಭಾರತೀಯ ಸೇನಾಧಿಕಾರಿಯೊಬ್ಬರ ಪತ್ನಿ, ಈ ಪ್ರಶಸ್ತಿಯ ರೂಪುರೇಶೆ ತಯಾರಿಸಿದರು. ಆಕಸ್ಮಿಕವೆಂಬಂತೆ ಅವರ ಅಳಿಯ ಮೇಜರ್ ಸೋಮನಾಥ ಶರ್ಮಾ, ಈ ಪ್ರಶಸ್ತಿಯನ್ನ ಪಡೆದ ಮೊದಲಿಗರಾದರು. ಕಂಚಿನಿಂದ ತಯಾರಿಸಲಾಗುವ ಈ ಪದಕದ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವನ್ನ ಉಬ್ಬಾದ ವೃತ್ತದ ಮೇಲೆ ಮೂಡಿಸಲಾಗಿದೆ. ಇದನ್ನ ಸುತ್ತುವರೆದಂತೆ ಇಂದ್ರ ವಜ್ರಾಯುಧದ ನಾಲ್ಕು Replica ಗಳಿವೆ. ಪದಕದ ಇನ್ನೊಂದು ಬದಿಯಲ್ಲಿ ಕಮಲ ಪುಷ್ಪದಿಂದ ಪ್ರತ್ಯೇಕಗೊಂಡಂತೆ ' ಪರಮವೀರ ಚಕ್ರ ' ಎಂಬುದನ್ನ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕೆತ್ತಲಾಗಿದೆ. ಋಷಿ ದಧೀಚಿ ದೇವತೆಗಳಿಗೆ ತನ್ನ ದೇಹದ ಮೂಳೆಯನ್ನು ವಜ್ರಾಯುಧ ಸೃಷ್ಟಿಗೆ ನೀಡಿದ ಐತಿಹ್ಯವೇ ಈ ಪದಕ ಪ್ರದಾನದ ಹಿಂದಿರುವ ತತ್ವ.

2 ಇತರೆ ಸೇನಾ ಪದಕಗಳು ii. ಮಹಾವೀರ ಚಕ್ರ - ಇದು ಎರಡನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ. iii. ವೀರ ಚಕ್ರ - ಇದು ಮೂರನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ಕೊರೆಯಲಾದ ಚಕ್ರದ ಮೇಲೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಕಡು ನೀಲಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ.

3 ಭಾರತ ರತ್ನ ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಕಲೆ, ಸಾಹಿತ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳ ಜೊತೆಗೆ ಸಾರ್ವಜನಿಕ ರಂಗದಲ್ಲಿ ಗುರುತಿಸಬಹುದಾದ ಸಾಧನೆಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. 2ನೇ ಜನವರಿ 1954 ರಂದು ಸ್ಥಾಪಿತವಾದ ಈ ಪ್ರಶಸ್ತಿ 13ನೇ ಜುಲೈ 1977 ರಿಂದ 26ನೇ ಜನವರಿ 1980 ರವರೆಗೆ ಯಾರನ್ನೂ ಅಲಂಕರಿಸಲಿಲ್ಲ. ಅರಳಿ ಮರದ ಎಲೆಯಾಕರದ ಈ ಪದಕದ ಒಂದು ಬದಿ ಸೂರ್ಯನ ಚಿತ್ರದ ಕೆಳಗೆ ಭಾರತ ರತ್ನ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇನ್ನೊಂದು ಬದಿಯಲ್ಲಿ ರಾಷ್ಟ್ರ ಲಾಂಛನ ಮತ್ತು ಧ್ಯೇಯ ವಾಕ್ಯ ಕೆತ್ತಲಾಗಿದೆ. ಬಿಳಿ ಬಣ್ಣದ Ribbon ಈ ಪದಕವನ್ನ ಹಿಡಿದಿಡುತ್ತದೆ. ಪ್ರಶಸ್ತಿ ಆರಂಭಿಸುವಾಗ ನಿಯಮಗಳಲ್ಲಿ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಈ ಪ್ರಶಸ್ತಿಗೆ ಭಾಜನರಾಗಲಿಲ್ಲ. 1992 ರಲ್ಲಿ ನೇತಾಜಿ ಸುಭಾಷ ಚಂದ್ರರಿಗೆ ನೀಡಿದ ಈ ಪ್ರಶಸ್ತಿಯನ್ನ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಕಾನೂನಿನ ತೊಡಕುಗಳ ಕಾರಣ ಹಿಂಪಡೆಯಲಾಯಿತು. ಸುಭಾಷ ಚಂದ್ರರು ನಿಧನರಾಗಿರುವ ಖಚಿತ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲದಿರುವುದು ಪ್ರಶಸ್ತಿ ಹಿಂಪಡೆಯಲು ಕಾರಣವಾಯಿತು.

4 ಪದ್ಮ ವಿಭೂಷಣ ಭಾರತ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

5 ಪದ್ಮಭೂಷಣ ಭಾರತ ಸರ್ಕಾರ ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

6 ಪದ್ಮಶ್ರೀ ಭಾರತ ಸರ್ಕಾರ ನೀಡುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

7 ದಾದಾ ಸಾಹೇಬ ಫಾಲ್ಕೆ 1969 ರಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನ ಸ್ಥಾಪಿಸಿ ಸಿನೆಮಾ ಜಗತ್ತಿನಲ್ಲಿ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿಯನ್ನ ನೀಡುತ್ತ ಬಂದಿದೆ. ಆ ವರ್ಷ ದಾದಾ ಸಾಹೇಬ್ ಫಾಲ್ಕೆ ಯವರ ಜನ್ಮ ಶತಮಾನೋತ್ಸವ.

8 ರಾಜೀವ್ ಗಾಂಧಿ ಖೇಲ್ ರತ್ನ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ. 1991-92 ರಲ್ಲಿ ಈ ಪ್ರಶಸ್ತಿಯನ್ನ ಆರಂಭಿಸಲಾಯಿತು. ತಂಡ ಅಥವಾ ವ್ಯಕ್ತಿ ಇಬ್ಬರಿಗೂ ನೀಡಬಹುದಾದ ಪ್ರಶಸ್ತಿ ಇದು. ಪ್ರತಿ ವರ್ಷ 1ನೇ ಏಪ್ರಿಲ್ ನಿಂದ ಮುಂದಿನ ವರ್ಷದ 31 ಮಾರ್ಚ್ ವರೆಗಿನ ಸಾಧನೆಯನ್ನ ಪರಿಗಣಿಸಲಾಗುತ್ತದೆ. ಯಾವುದೇ ರಾಜ್ಯ ಸರ್ಕಾರ, ಲೋಕಸಭಾ ಸದಸ್ಯ, SAI ಅಥವಾ ಆಯಾ ಕ್ರೀಡೆಯ ರಾಷ್ಟ್ರೀಯ ಪ್ರಾಧಿಕಾರಗಳು ನಾಮನಿರ್ದೇಶವನ್ನ ಕೇಂದ್ರ ಸರ್ಕಾರದ ಯುವಜನಸೇವಾ ಇಲಾಖೆಗೆ ಸಲ್ಲಿಸಬೇಕು. ಈ ಪ್ರಶಸ್ತಿಯು ಪದಕ, ರೂ. 7,50,000/- ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

9 ಅರ್ಜುನ ಪ್ರಶಸ್ತಿ 1961 ರಲ್ಲಿ ಕೇಂದ್ರ ಸರ್ಕಾರ ಇದನ್ನ ಸ್ಥಾಪಿಸಿತು. ಕಳೆದ ಮೂರು ವರ್ಷಗಳಲ್ಲಿ ಗಣನೀಯ ಹಾಗೂ ನಿಯಮಿತ ಸಾಧನೆ ಮಾಡಿ, ಪ್ರಶಸ್ತಿಗೆ ಭಾಜನರಾದ ವರ್ಷಕ್ಕೆ ಅತ್ಯುತ್ತಮ ಅನ್ನಬಹುದಾದ ಸಾಧನೆ ಮಾಡಿದ್ದಲ್ಲಿ ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ರೂ.5,00,000/- ನಗದು , ಅರ್ಜುನನ ಕಂಚಿನ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನ ಇದು ಒಳಗೊಂಡಿದೆ.

10 ದ್ರೋಣಾಚಾರ್ಯ ಪ್ರಶಸ್ತಿ 1985 ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿಯನ್ನ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ. ದ್ರೋಣಾಚಾರ್ಯರ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ರೂ.3,00,000/- ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ.

11 ಧ್ಯಾನಚಂದ್ ಪ್ರಶಸ್ತಿ ಕ್ರೀಡಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿ ಇದು. 2002ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿ ಒಂದು ಪ್ರಶಸ್ತಿ ಫಲಕ , ರೂ.1,50,000/- ನಗದು ಮತ್ತು ಪ್ರಶಸ್ತಿ ಪತ್ರವನ್ನ ಒಳಗೊಂಡಿದೆ.

No comments:

Post a Comment

Thanking You For Your Valuable Comment. Keep Smile